ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಹೆಬ್ಬಾಳ ಫ್ಲೈಓವರ್ ಮೇಲೆ ಕಾರು, ಬೈಕ್‌ ಸವಾರರ ನಡುವೆ ಸಂಚಾರ ನಿಯಮ ಉಲ್ಲಂಘನೆ ಗಲಾಟೆ

ಬೆಂಗಳೂರು ಹೆಬ್ಬಾಳ ಫ್ಲೈಓವರ್ ಮೇಲೆ ಕಾರು, ಬೈಕ್‌ ಸವಾರರ ನಡುವೆ ಸಂಚಾರ ನಿಯಮ ಉಲ್ಲಂಘನೆ ಗಲಾಟೆ

ಬೆಂಗಳೂರು ಹೆಬ್ಬಾಳ ಫ್ಲೈಓವರ್ ಮೇಲೆ ಕಾರು, ಬೈಕ್‌ ಸವಾರರ ನಡುವೆ ಸಂಚಾರ ನಿಯಮ ಉಲ್ಲಂಘನೆ ಗಲಾಟೆ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ಪೊಲೀಸ್ ದೂರು ದಾಖಲಿಸುವಂತೆ ಪೊಲೀಸರು ವಿಡಿಯೋ ಪೋಸ್ಟ್‌ ಮಾಡಿದಾತನಿಗೆ ಸಲಹೆ ನೀಡಿದ್ದಾರೆ.

ಬೆಂಗಳೂರು ಹೆಬ್ಬಾಳ ಫ್ಲೈಓವರ್ ಮೇಲೆ ಕಾರು, ಬೈಕ್‌ ಸವಾರರ ನಡುವೆ ಸಂಚಾರ ನಿಯಮ ಉಲ್ಲಂಘನೆ ಗಲಾಟೆ
ಬೆಂಗಳೂರು ಹೆಬ್ಬಾಳ ಫ್ಲೈಓವರ್ ಮೇಲೆ ಕಾರು, ಬೈಕ್‌ ಸವಾರರ ನಡುವೆ ಸಂಚಾರ ನಿಯಮ ಉಲ್ಲಂಘನೆ ಗಲಾಟೆ

ಬೆಂಗಳೂರು: ಕಾರನ್ನು ತಪ್ಪು ದಿಕ್ಕಿನಲ್ಲಿ ಓಡಿಸಿದ ಕಾರು ಮಾಲೀಕನನ್ನು ಎದುರಿಸಿದ್ದಕ್ಕಾಗಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾರು ಚಾಲಕ ಬೈಕ್ ಸವಾರನನ್ನು ದೈಹಿಕವಾಗಿ ಮತ್ತು ಮೌಖಿಕವಾಗಿ ನಿಂದಿಸುತ್ತಿರುವುದು ಕಂಡುಬಂದಿದೆ.

ಟ್ರೆಂಡಿಂಗ್​ ಸುದ್ದಿ

ವೈರಲ್ ವಿಡಿಯೋದಲ್ಲಿರುವ ದೃಶ್ಯ ಗಮನಿಸಿದರೆ, ಬೈಕ್ ಸವಾರ ರಸ್ತೆಯಲ್ಲಿ ನಿಲ್ಲಿಸಿ ತಪ್ಪು ದಿಕ್ಕಿನಲ್ಲಿ ಚಲಿಸಲು ಪ್ರಯತ್ನಿಸುತ್ತಿದ್ದ ಕಾರಿಗೆ ದಾರಿ ಮಾಡಿಕೊಡಲು ನಿರಾಕರಿಸಿದ್ದು ಕಂಡುಬಂದಿದೆ. ಆಗ ಚಾಲಕ ಕಾರಿನಿಂದ ಹೊರಬಂದು ಬೈಕ್ ಸವಾರನನ್ನು ನಿಂದಿಸಲು ಪ್ರಾರಂಭಿಸಿದನು. ಅವರು "ರಸ್ತೆ ತುಂಬಾ ದೊಡ್ಡದಾಗಿದೆ. ನೀವು ಆ ದಾರಿಯಲ್ಲಿ ಹೋಗಲು ಸಾಧ್ಯವಿಲ್ಲವೇ? ನಾನು ನಿನ್ನನ್ನು ಮುಗಿಸುತ್ತೇನೆ." ಎಂದು ಕಿರುಚುತ್ತಿರುವುದು ಕಂಡುಬಂದಿದೆ.

ಬೆಂಗಳೂರು ಸಂಚಾರ ನಿಯಮ ಉಲ್ಲಂಘನೆ; ವಿಡಿಯೋ ವೈರಲ್‌

ಜನನಿಬಿಡ ಹೆಬ್ಬಾಳ ಫ್ಲೈಓವರ್ ಮೇಲೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ದೂರುದಾರರು ಸೋಷಿಯಲ್ ಮೀಡಿಯಾದಲ್ಲಿ “ಈ ವ್ಯಕ್ತಿ ಯಾವುದೇ ಸೂಚಕವಿಲ್ಲದೆ ಮಧ್ಯದ ಓಣಿಯಿಂದ ಎಡ ಪಥಕ್ಕೆ ಇದ್ದಕ್ಕಿದ್ದಂತೆ ಬಂದು ನನ್ನನ್ನು ಹೊಡೆಯಲು ಹೊರಟ. ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ಕೇಳಿದಾಗ ಆತ ಬಂದು ನನ್ನನ್ನು ತಡೆದು ನಿಂದಿಸಲು ಪ್ರಾರಂಭಿಸಿದ. ಸ್ಥಳ ಹೆಬ್ಬಾಳ ಫ್ಲೈ ಓವರ್, ಸಮಯ 9:04 ಗಂಟೆ” ಎಂದು ಬರೆದುಕೊಂಡಿದ್ದಾರೆ.

ಈ ವೀಡಿಯೊ 1,800 ಕ್ಕೂ ಹೆಚ್ಚು ರಿಪೋಸ್ಟ್‌ ಆಗಿದ್ದು, ಬಂದಿದ್ದು, ಈ ಘಟನೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಂಟರ್‌ನೆಟ್‌ ಬಳಕೆದಾರರು ಬೆಂಗಳೂರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಆದಾಗ್ಯೂ, ಪೊಲೀಸರು ಈ ವಿಷಯವನ್ನು ಒಪ್ಪಿಕೊಂಡರು ಮತ್ತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ದೂರುದಾರರನ್ನು ಕೇಳಿದರು. ಅಲೋಕ್ ಕುಮಾರ್ ಅವರು ಇದಕ್ಕೆ ಪ್ರತಿಕ್ರಿಯಿಸಿದ್ದು, ಘಟನೆ ನಡೆದ ಪರಿಮಿತಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಆದರೆ, ಪ್ರಥಮ್ ಶೆಟ್ಟಿ ಈ ಸದ್ಯ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ.

ಈ ಹಿಂದೆ ಬೆಂಗಳೂರು ಪೊಲೀಸರು ನಗರದಲ್ಲಿ ತಪ್ಪು ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದವರನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡುವುದು ಟೆಕ್ ರಾಜಧಾನಿಯಲ್ಲಿ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಟಿ20 ವರ್ಲ್ಡ್‌ಕಪ್ 2024