ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tiger Near Mysore: ಸಿಎಂ ಸಿದ್ದರಾಮಯ್ಯರ ಸ್ವಗ್ರಾಮದ ಸಮೀಪಕ್ಕೆ ಬಂದ ಹುಲಿರಾಯ, ಅರಣ್ಯ ಇಲಾಖೆ ಅಲರ್ಟ್‌

Tiger Near Mysore: ಸಿಎಂ ಸಿದ್ದರಾಮಯ್ಯರ ಸ್ವಗ್ರಾಮದ ಸಮೀಪಕ್ಕೆ ಬಂದ ಹುಲಿರಾಯ, ಅರಣ್ಯ ಇಲಾಖೆ ಅಲರ್ಟ್‌

  • ಮೈಸೂರು ಸುತ್ತಮುತ್ತಲಿನಲ್ಲಿಯೇ ಹುಲಿ ಚಲನವಲನ ಕಂಡು ಬಂದಿದೆ. ಈ ಬಾರಿ ಹುಲಿ ಸಿಎಂ ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿ ಸಮೀಪದ ವರಕೋಡು ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಕರ್ನಾಟಕ ಅರಣ್ಯ ಇಲಾಖೆ ಕಾರ್ಯೋನ್ಮುಖವಾಗಿದೆ.

ಮೈಸೂರು ತಾಲ್ಲೂಕಿನ ವರಕೋಡು ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆ ಸಮೀಪದಲ್ಲಿಯೇ ಹುಲಿಯೊಂದು ಸಂಚರಿಸುತ್ತಿರುವುದು ಕಂಡು ಬಂದಿದೆ. ಸಿದ್ದೇಶ್‌ ಎಂಬುವವರು ವಿಡಿಯೋ ಮಾಡಿ ಅರಣ್ಯ ಇಲಾಖೆಗೆ ನೀಡಿದ್ದಾರೆ. 
icon

(1 / 8)

ಮೈಸೂರು ತಾಲ್ಲೂಕಿನ ವರಕೋಡು ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆ ಸಮೀಪದಲ್ಲಿಯೇ ಹುಲಿಯೊಂದು ಸಂಚರಿಸುತ್ತಿರುವುದು ಕಂಡು ಬಂದಿದೆ. ಸಿದ್ದೇಶ್‌ ಎಂಬುವವರು ವಿಡಿಯೋ ಮಾಡಿ ಅರಣ್ಯ ಇಲಾಖೆಗೆ ನೀಡಿದ್ದಾರೆ. 

ಸಿಬ್ಬಂದಿಗಳು ವರಕೋಡು ಸುತ್ತಮುತ್ತ ಬೀಡು ಬಿಟ್ಟಿದ್ದು ಹುಲಿಯ ಚಲನವಲನವನ್ನು ಭಾನುವಾರವೂ ವೀಕ್ಷಿಸುತ್ತಿದೆ.  ಥರ್ಮಲ್‌ ದ್ರೋಣ್‌ ಕೂಡ ಬಳಸುತ್ತಿದೆ. 
icon

(2 / 8)

ಸಿಬ್ಬಂದಿಗಳು ವರಕೋಡು ಸುತ್ತಮುತ್ತ ಬೀಡು ಬಿಟ್ಟಿದ್ದು ಹುಲಿಯ ಚಲನವಲನವನ್ನು ಭಾನುವಾರವೂ ವೀಕ್ಷಿಸುತ್ತಿದೆ.  ಥರ್ಮಲ್‌ ದ್ರೋಣ್‌ ಕೂಡ ಬಳಸುತ್ತಿದೆ. 

ಹುಲಿ ಕಂಡು ಬಂದಿರುವುದು ಸಿಎಂ ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿ ಸಮೀಪದಲ್ಲಿಯೇ. ಇಲ್ಲಿಂದ ಕೆಲವೇ ಕಿ.ಮಿ. ದೂರದಲ್ಲಿ ಹುಲಿ ಕಂಡಿದ್ದು ಅರಣ್ಯ ಇಲಾಖೆ ತಂಡ ಕಾರ್ಯೋನ್ಮುಖವಾಗಿದೆ. 
icon

(3 / 8)

ಹುಲಿ ಕಂಡು ಬಂದಿರುವುದು ಸಿಎಂ ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿ ಸಮೀಪದಲ್ಲಿಯೇ. ಇಲ್ಲಿಂದ ಕೆಲವೇ ಕಿ.ಮಿ. ದೂರದಲ್ಲಿ ಹುಲಿ ಕಂಡಿದ್ದು ಅರಣ್ಯ ಇಲಾಖೆ ತಂಡ ಕಾರ್ಯೋನ್ಮುಖವಾಗಿದೆ. 

ಮೈಸೂರು ಸುತ್ತಮುತ್ತ ಹುಲಿ ಸಂಚಾರ ಕೆಲವು ದಿನಗಳಿಂದ ಇದೆ. ಜಯಪುರ ಸಮೀಪದ ಚಿಕ್ಕನಹಳ್ಳಿ ಮೀಸಲು ಅರಣ್ಯದಿಂದ ಹುಲಿ ಮೈಸೂರು-ಶ್ರೀರಂಗಪಟ್ಟಣ-ಬನ್ನೂರು ಭಾಗದಲ್ಲಿ ಸಂಚರಿಸುತ್ತಿದೆ.
icon

(4 / 8)

ಮೈಸೂರು ಸುತ್ತಮುತ್ತ ಹುಲಿ ಸಂಚಾರ ಕೆಲವು ದಿನಗಳಿಂದ ಇದೆ. ಜಯಪುರ ಸಮೀಪದ ಚಿಕ್ಕನಹಳ್ಳಿ ಮೀಸಲು ಅರಣ್ಯದಿಂದ ಹುಲಿ ಮೈಸೂರು-ಶ್ರೀರಂಗಪಟ್ಟಣ-ಬನ್ನೂರು ಭಾಗದಲ್ಲಿ ಸಂಚರಿಸುತ್ತಿದೆ.

ಹುಲಿ ಕಂಡಿರುವ ವರಕೋಡು ಗ್ರಾಮದಿಂದ ಐದಾರು ಕಿ.ಮಿ ದೂರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸ್ವಗ್ರಾಮಸಿದ್ದರಾಮನಹುಂಡಿ ಇದೆ. ಈ ಭಾಗದಲ್ಲಿ ಕುರುಚಲು ಅರಣ್ಯ ಇರುವುದರಿಂದ ಚಿರತೆಗಳಿದ್ದು, ಮೊದಲ ಬಾರಿಗೆ ಹುಲಿ ಕಂಡು ಬಂದಿದೆ. 
icon

(5 / 8)

ಹುಲಿ ಕಂಡಿರುವ ವರಕೋಡು ಗ್ರಾಮದಿಂದ ಐದಾರು ಕಿ.ಮಿ ದೂರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸ್ವಗ್ರಾಮಸಿದ್ದರಾಮನಹುಂಡಿ ಇದೆ. ಈ ಭಾಗದಲ್ಲಿ ಕುರುಚಲು ಅರಣ್ಯ ಇರುವುದರಿಂದ ಚಿರತೆಗಳಿದ್ದು, ಮೊದಲ ಬಾರಿಗೆ ಹುಲಿ ಕಂಡು ಬಂದಿದೆ. 

ಹುಲಿ ಸೆರೆಗೆ ಈಗಾಗಲೇ ಬೋನುಗಳನ್ನು ಅರಣ್ಯ ಇಲಾಖೆ ಇರಿಸಿ ಸೆರೆ ಹಿಡಿಯುವ ಪ್ರಯತ್ನವನ್ನೂ ನಡೆಸಿದೆ. 
icon

(6 / 8)

ಹುಲಿ ಸೆರೆಗೆ ಈಗಾಗಲೇ ಬೋನುಗಳನ್ನು ಅರಣ್ಯ ಇಲಾಖೆ ಇರಿಸಿ ಸೆರೆ ಹಿಡಿಯುವ ಪ್ರಯತ್ನವನ್ನೂ ನಡೆಸಿದೆ. 

ಕಳೆದ ವರ್ಷ ನಂಜನಗೂಡು ಭಾಗದಲ್ಲಿ ಇದೇ ರೀತಿ ಹುಲಿ ಕಾಣಿಸಿಕೊಂಡಾಗ ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.
icon

(7 / 8)

ಕಳೆದ ವರ್ಷ ನಂಜನಗೂಡು ಭಾಗದಲ್ಲಿ ಇದೇ ರೀತಿ ಹುಲಿ ಕಾಣಿಸಿಕೊಂಡಾಗ ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.

ಹುಲಿ ಭಯದ ಹಿನ್ನೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಮೈಸೂರು ವಿಭಾಗದ ಡಿಸಿಎಫ್‌ ಡಾ.ಬಸವರಾಜ ಅವರು ಸಾರ್ವಜನಿಕ ಪ್ರಕಟಣೆ ಹೊರಡಿಸಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ. ಮಾಹಿತಿ ಇದ್ದರೆ ವಾಟ್ಸ್‌ ಆಪ್‌ಗೆ ತಿಳಿಸುವಂತೆಯೂ ಹೇಳಿದ್ದಾರೆ.
icon

(8 / 8)

ಹುಲಿ ಭಯದ ಹಿನ್ನೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಮೈಸೂರು ವಿಭಾಗದ ಡಿಸಿಎಫ್‌ ಡಾ.ಬಸವರಾಜ ಅವರು ಸಾರ್ವಜನಿಕ ಪ್ರಕಟಣೆ ಹೊರಡಿಸಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ. ಮಾಹಿತಿ ಇದ್ದರೆ ವಾಟ್ಸ್‌ ಆಪ್‌ಗೆ ತಿಳಿಸುವಂತೆಯೂ ಹೇಳಿದ್ದಾರೆ.


ಇತರ ಗ್ಯಾಲರಿಗಳು